You don't have javascript enabled. Please Enabled javascript for better performance.

“ಸಾಮಾಜಿಕ ನ್ಯಾಯ ಮತ್ತು ದೇವರಾಜ ಅರಸು” ವಿಷಯದ ಕುರಿತು ಪ್ರಬಂಧ ಸ್ಪರ್ಧೆ

Start Date: 06-08-2022
End Date: 16-08-2022

ಜನಪರ ನಾಯಕ, 'ಸಾಮಾಜಿಕ ನ್ಯಾಯದ ಹರಿಕಾರ' ಎಂದು ಖ್ಯಾತರಾದವರು ರಾಜ್ಯ ಕಂಡ ...

See details Hide details

ಜನಪರ ನಾಯಕ, 'ಸಾಮಾಜಿಕ ನ್ಯಾಯದ ಹರಿಕಾರ' ಎಂದು ಖ್ಯಾತರಾದವರು ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು. ಸಮ ಸಮಾಜ ನಿರ್ಮಾಣದ ರೂವಾರಿ. ಉಳುವವನಿಗೆ ಭೂಮಿ, ಹಾವನೂರು ಆಯೋಗದಂತಹ ಅವರ ಪ್ರಮುಖ ನಿರ್ಧಾರಗಳ ಪ್ರತಿಫಲ ಇಂದಿನ ಪೀಳಿಗೆಗೆ ಸಿಗುತ್ತಿದೆ.

ದೇವರಾಜ್ ಅರಸು ರವರು ರಾಜ್ಯ ಕಂಡ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸುತ್ತಾ, ಇಲಾಖೆಯು ನಾಗರೀಕರಿಗೆ ‘ಸಾಮಾಜಿಕ ನ್ಯಾಯ ಮತ್ತು ದೇವರಾಜ ಅರಸು’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ಸಂತಸ ವ್ಯಕ್ತಪಡಿಸುತ್ತದೆ.

ಆಯ್ದ ಉನ್ನತ ನಮೂದುಗಳಿಗೆ ಈ ಕೆಳಗಿನಂತೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ:
ಎ. ಮೊದಲ ಬಹುಮಾನ - 10,000/-
ಬಿ. ಎರಡನೇ ಬಹುಮಾನ - 7500/-
ಸಿ. ಮೂರನೇ ಬಹುಮಾನ - 5000/-
ಡಿ. ತೀರ್ಪುಗಾರರ ವಿಶೇಷ ಆಯ್ಕೆ ಬಹುಮಾನ - 3000/-

ಹೆಚ್ಚಿನ ಮಾಹಿತಿಗಾಗಿ
ಯಾವುದೇ ಹೆಚ್ಚಿನ ಪ್ರಶ್ನೆಗಳು ಅಥವಾ ಸಂದೇಹಗಳಿಗಾಗಿ ಭಾಗವಹಿಸುವವರು bcdbng@kar.nic.in ಅನ್ನು ಸಂಪರ್ಕಿಸಲು ವಿನಂತಿಸಲಾಗಿದೆ.

ಸಲ್ಲಿಸಲು ಕೊನೆಯ ದಿನಾಂಕ 16.08.2022

ನಿಯಮಗಳು ಮತ್ತು ಷರತ್ತುಗಳು

• ಎಲ್ಲಾ ನಮೂದುಗಳನ್ನು ನಮ್ಮ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು
• ಯಾವುದೇ ಇತರೆ ಮಾಧ್ಯಮದ ಮೂಲಕ ಸಲ್ಲಿಕೆಯನ್ನು ಸ್ವೀಕರಿಸಲಾಗುವುದಿಲ್ಲ
• ಕೈ ಬರಹದ ಪ್ರಬಂಧವು ಸ್ಪಷ್ಟವಾಗಿರಬೇಕು
• ಎಲ್ಲಾ ನಮೂದುಗಳು A4 ಶೀಟ್‌ನಲ್ಲಿರಬೇಕು ಮತ್ತು ಸ್ಕ್ಯಾನ್ ಮಾಡಿದ PDF/.doc ಸ್ವರೂಪದಲ್ಲಿ ಸಲ್ಲಿಸಬೇಕು.
•16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ.
• 3000 ಪದಗಳ ಮಿತಿಯನ್ನು ಮೀರಬಾರದು.
• ಭಾಗವಹಿಸುವವರು ತಮ್ಮ ಸಲ್ಲಿಕೆಯೊಂದಿಗೆ ಈ ಕೆಳಗಿನ ವಿವರಗಳನ್ನು ನಮೂದಿಸಬೇಕು:
1. ಹೆಸರು
2. ವಿಳಾಸ
3. ವಯಸ್ಸು
4. ಸಂಪರ್ಕ ಸಂಖ್ಯೆ
5. ಇಮೇಲ್ ಐಡಿ
• ಅಪೂರ್ಣ ಪ್ರೊಫೈಲ್‌ಗಳು ಹಾಗೂ ಅಗತ್ಯವಿರುವ ವಿವರಗಳನ್ನು ಹೊಂದಿರದ ನಮೂದುಗಳನ್ನು ಪರಿಗಣಿಸಲಾಗುವುದಿಲ್ಲ.
• ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ

All Comments
ಸಲ್ಲಿಕೆಗಳನ್ನು ( 418) Approved Submissions (0) Submissions Under Review (418) ಮುಚ್ಚಿದ